Posts

Showing posts from November, 2022

ವೈಫಲ್ಯ ಎದುರಿಸುವ ಮನೋಭಾವವಿರಲಿ

ವೈಫಲ್ಯ ಎದುರಿಸುವ ಮನೋಭಾವವಿರಲಿ ಮಕಳು ಯಾವುದೇ ವಯೋಮಾನವಿರಲಿ ತಾಯಿಗೆ ಮಮಕಾರ, ಮೊದಲ ಬಾರಿ ತನ್ನ ಮಡಿಲಿಗೆ ಮಗು ಬಂದಿದ್ದ ಆಕೆ ಎಲ್ಲಾ ಹಂತದಲ್ಲಿ ಮಗುವಿನ ಹೊಣೆ ಹೊರುತ್ತಾಳೆ. ಮಗುವಿನ ಆಟ ಪಾಠ ನೋಡಿ ಖುಷಿ ಪಡುವ ಪೋಕರಿಗೆ ಮಗು ಬೆಳೆದ ಹಾಗೆಯೇ ನಿಧಾನವಾಗಿ ಆತಂಕ ಶುರುವಾಗುತ್ತದೆ. ಮನೆಯಲ್ಲಿ ಸಹಜವಾಗಿ ಅಮ್ಮನ ಮಡಿಲಲ್ಲಿ ಅಜ್ಜನ ಅಪ್ಪುಗೆಯಲ್ಲಿ ಅಕ್ಕನ ಮಮತೆಯಲ್ಲಿ ಮಿಂದೇಳುವ ಮಕ್ಕಳಿಗೆ ಹೊರಗಿನವರ ಸಣ್ಣ ನಿರ್ಲಕ್ಷವೂ ಅರಗಿಸಲು ಆಗದು. ಬೇರೆಯವರ ಜೊತೆ ಹೊಂದಾಣಿಕೆಯ ಸಮಸ್ಯೆ, ಅಂತು ಬೆರೆಯುವುದರ ಸಮಸ್ಯೆಯಂಥ ಚಿಕ್ಕ ಪುಟ್ಟ ಸಮಸ್ಯೆ ಎದುರಿಸುವ ಮಕ್ಕಳು ತಡವರಿಸುತ್ತಾರೆ. ಆಟದ ಸಣ್ಣ ಸೋಲಿಗೂ ತೀರಾ ಕುಗ್ಗುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಲ್ಲ ರಂಗದಲ್ಲೂ ಮುಂದಿರ ಬೇಕು ಎಂಬ ತುಡಿತ ಪೋಷಕರಲ್ಲಿ ಸಹಜವೇ ಆದರೆ, ಅದಕ್ಕೆ ತಕ್ಕ ವಾತಾವರಣ, ತಯಾರಿ, ಮನಸ್ಥಿತಿ ಇದೆಯೇ ಎಂಬುದೇ ಮುಖ್ಯ ವಿಚಾರ. ಪೋಷಕರಿಗೆ ಸಲಹೆ  *ಈ ಪೋಷಕರು ಸದಾ ಕಾಲ ಮಕ್ಕಳ ಜತೆಯಲ್ಲಿಯೇ ಇರಲು ಆಗದು, ಹಾಗಾಗಿ ಮಕ್ಕಳಿಂದ ತುಸು ಮಾನಸಿಕವಾಗಿ ಅಂತರ ಗತ್ಯ. ಇಲ್ಲವಾದಲ್ಲಿ ಮಕ್ಕಳು ಎಲ್ಲದಕ್ಕೂ ಪೋಷಕರ ಮೇಲೆ ಅವಲಂಬಿತರಾಗುತ್ತಾರೆ. * ಈ ಮಕ್ಕಳ ಯಾವುದೇ ಕೆಲಸ, ಕಾರ್ಯದ ಮೇಲೆ ಅತಿಯಾಗಿ ನಿರೀಕ್ಷೆ ಇಡಬಾರದು, ಅತಿ ನಿರೀಕ್ಷೆ ಸಹಜವಾಗಿ ಒತ್ತಡ ತರುತ್ತದೆ. ನಿರೀಕ್ಷೆ ಹುಸಿಯಾದರೆ ನಿರಾಸೆ ಆಗುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಕುಂದಬಹುದು. * ಉತ್ತಮ ಕೆಲಸಕ್...

book reading

ಮಕ್ಕಳಿಗೆ ಪುಸ್ತಕಗಳನ್ನು ಓದಿಸಲು ಪ್ರಾರಂಭ ಮಾಡೋದು ಹೇಗೆ? ಅದಕ್ಕೂ ಒಂದು ಕ್ರಮ ಅಂತಿದ್ಯಾ? ಈ ಬಾರಿಯ ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಈ ಕುರಿತ ಸವಿಸ್ತಾರವಾದ ಲೇಖನ. ಆಯಾ ವಯಸ್ಸಿನ ಮಕ್ಕಳಿಗೆ (10 ತಿಂಗಳಿಂದ 15 ವರ್ಷ) ಸರಿ ಹೊಂದುವ ಪುಸ್ತಕಗಳ ಹೆಸರೂ ಇದೆ. ಇದಲ್ಲದೆ ಇನ್ನೂ ಸಾಕಷ್ಟು ಪುಸ್ತಕಗಳಿವೆ. ಅವುಗಳ ಹೆಸರನ್ನು ನೀವೂ ತಿಳಿಸಿ. ಆಸಕ್ತರಿಗೆ ಸಹಾಯವಾದೀತು. ನನಗೆ ಪುಸ್ತಕಗಳ ಕುರಿತು ಮಾಹಿತಿ ಕೊಟ್ಟ ಮತ್ತು ಯಾವ ವಯಸ್ಸಿಗೆ ಯಾವ ಪುಸ್ತಕ ಸರಿ ಹೊಂದುತ್ತದೆ ಎಂಬ ಬಗ್ಗೆ ನಿಖರ ಮಾಹಿತಿಯುಳ್ಳ 'ಬುಕ್ ವರ್ಲ್ಡ್' ಗ್ರಂಥಾಲಯದ (ರಾಜರಾಜೇಶ್ವರಿ ನಗರ) ಸ್ಥಾಪಕಿಯಾದ ರೇಣುಕಾ ಅವರಿಗೂ ಧನ್ಯವಾದ. ಅವರ ಓದು ಮತ್ತು ಪುಸ್ತಕದ ಕುರಿತ ಜ್ಞಾನ ಅಪಾರ.  ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯ.. (ವಿ.ಸೂ- ಆರಾಮಾಗಿ ಓದಿ. ಇದು ಲಾಂಗ್ ಪೋಸ್ಟ್) †**********† ಮಕ್ಕಳಲ್ಲಿ ಚಿಗುರಲಿ ಪುಸ್ತಕ ಪ್ರೀತಿ -ಶ್ರೀಕಲಾ ಡಿ.ಎಸ್. `ಕಥೆ ಪುಸ್ತಕ ಇದೆ. ಆದ್ರೆ ನನ್ನ ಮಗ ಓದೋದೇ ಇಲ್ಲ. ಹೋಗ್ಲಿ, ಪುಸ್ತಕ ತೆರೆದು ಅದರಲ್ಲಿರೋ ಚಿತ್ರಾನೂ ನೋಡೋದಿಲ್ಲ’ ಇದು ಬಹುತೇಕ ಹೆತ್ತವರು ತಮ್ಮ ಮಕ್ಕಳ ಮೇಲೆ ಮಾಡುವ ಮಾಮೂಲು ದೂರು. ನಿರಂತರವಾಗಿ ಓದುತ್ತಿದ್ದ ಹುಡುಗ ಯಾವುದೋ ಒಂದು ಅವಧಿಯಲ್ಲಿ ಓದುವತ್ತ ಗಮನ ಹರಿಸುತ್ತಿಲ್ಲ ಎಂದಾದರೆ ಬದಲಾದ ಆಸಕ್ತಿ ಕಾರಣವಿದ್ದೀತು. ಆದರೆ ಯಾವತ್ತೂ ಕಥೆ ಪುಸ್ತಕ ಓದಿಲ್ಲ ಅಂತಾದರೆ ಅದು ಆಸಕ್ತಿದಾಯಕ ಸಂಗತಿಯೇ ಆಗಿಲ್ಲ ಎಂದರ್...

friends

*ಗೆಳೆತನ*: ಎಲ್ಲಿಯವರೆಗೆ ಏಕವಚನದ ಸ್ನೇಹಿತರು ನಿಮ್ಮೊಂದಿಗಿರುತ್ತಾರೋ ಅಲ್ಲಿಯವರೆಗೂ ನೀವು ಸುಖಿಯೇ.  ಆದರೆ ಸಮಯ ಸರಿಯುತ್ತಿದ್ದಂತೆ ಇಂತಹ ಸ್ನೇಹಿತರ ಸಂಖ್ಯೆಯೂ ಕಡಿಮೆಯಾಗುತ್ತದೆ. ಊರು ಬಿಟ್ಟಿರೋ ಆಗ ನೋಡಿ ಇಂತಹ ಸ್ನೇಹಿತರೂ ದೂರವಾಗುತ್ತಾರೆ. ಅಥವಾ ವ್ಯವಹಾರ ಕೈತಪ್ಪಿ ಇತರರ ಮೇಲೆ ಅವಲಂಬಿತರಾದರೋ  ಆಗ ಸ್ವತಂತ್ರವಾಗಿ ಸ್ನೇಹಿತರೊಂದಿಗೆ ಕಳೆಯ ಬೇಕಾದ ಕಾಲಕ್ಕೂ ಸಂಚಕಾರ ಒದಗುತ್ತದೆ.  ಇನ್ನು ಅಂತಸ್ತು, ಹುದ್ದೆಯ ಕಾರಣದಿಂದ ಸ್ನೇಹಿತರಿಂದ ದೂರಾಗಿ ಮತ್ತೆ ಅನತಿ ಕಾಲದಲ್ಲೇ ಸಮಾನಾಭಿರುಚಿಯವರ ಗೆಳೆತನಕ್ಕೆ ಹಂಬಲಿಸಿದರೂ ಸಿಗುವ ಸಾಧ್ಯತೆ ಕಡಿಮೆಯೇ. ಬಹುದಿನದ ಬಳಿಕ ಸಿಕ್ಕ ಬಾಲ್ಯದ ಗೆಳೆಯರೂ, ನಮ್ಮನ್ನು ಹೋಗೋ ಬಾರೋ ಎಂದು ತಿದ್ದಿ ತೀಡಿದ ಹಿರಿಯರು, ಬೆತ್ತದಲ್ಲಿ ಬಾರಿಸಿ ಕಿವಿಹಿಂಡಿ ಕಲಿಸಿದ ಮಾಸ್ತರೂ ಸಹ  ದಿನಕಳೆದಂತೆ ನಮ್ಮನ್ನು ಹೋಗಿ, ಬನ್ನಿ ಎಂದು ಮಾತನಾಡಿಸುವುದು ಕೇಳಿದರೆ ಸಂಕಟವಾಗುತ್ತದೆ.  ವ್ಯಕ್ತಿ ಎಷ್ಟೇ ಸಾಧಿಸಿರಲಿ, ಸಹಪಥಿಕರಿಗಾಗಿ ಹಂಬಲಿಸುವುದು ಹೆಚ್ಚಾಗುತ್ತಲೇ ಹೋಗುತ್ತದೆ. ಅದು ತೋರಿಕೆಯಲ್ಲಿ ಕಾಣಬರದಿದ್ದರೂ ಆಳದಲ್ಲಿ ಹುದುಗಿರುವುದನ್ನು ತಪ್ಪಿಸಲು ಸಾಧ್ಯವಿಲ್ಲ.  ಪ್ರತಿಷ್ಠೆಯನ್ನು ದೂರವಿಟ್ಟು ರಜನಿಕಾಂತ್‌ ತನ್ನ ಗೆಳೆಯರೊಂದಿಗೆ ಕಾಲ ಕಳೆಯಲು ಬೆಂಗಳೂರಿಗೆ ಬಂದು ಹೋಗುತ್ತಾರೆ ಎಂಬುದನ್ನು ಹಿಂದೆ ಓದಿದಾಗ ನಗುತ್ತಿದ್ದೆ. ಆದರೆ ಅದು ವಾಸ್ತವದ ಬಯಕೆ ಎಂಬುದು ಅರ್ಥವಾಗುತ್ತಿದೆ....

ಅಜಾತಶತ್ರು ಶಿವು ,

  ಅಜಾತಶತ್ರು ಶಿವು , ಮತ್ತೆ ಹುಟ್ಟಿ ಬಾ ಶಿವು , ಕೆಲವೊಂದು ಸಾವು , ಹೀಗೆ ಬದುಕಿರುವವರನ್ನು ನಿರ್ಜೀವನಾಗಿಸಿ ಬಿಡುತ್ತದೆ , ಯಾಕೋ ಏನೋ ಇತ್ತೀಚಿಗೆ ನಾನು ಕೇಳಿಸಿಕೊಂಡು ಇರುವ ಅನೇಕ ಸಾವಿನ ಸುದ್ದಿಗಳು , ದೇವರು ಎಷ್ಟರಮಟ್ಟಿಗೆ ಕ್ರೂರಿ ಎಂಬುವಂತಹ , ನಿರ್ಧಾರಕ್ಕೆ ಬಂದು ಬಿಡುವಷ್ಟು ನಂಬಿಕೆಯನ್ನು ಘಾಸಿಗೊಳಿಸಿದೆ , 31 ನೇ ತಾರೀಕು ನಿಧನರಾದ ನಮ್ಮೆಲ್ಲರ ಆತ್ಮೀಯ ಬಂಧು ಮುಂಡಾಸ್ ಶಿವಕುಮಾರ್ ಅವರು ನಮ್ಮೆಲ್ಲರ ಶಿವು ಶಿವಣ್ಣ ಎಂದೇ ಚಿರಪರಿಚಿತರು , ಕಳೆದ 35 ವರ್ಷಗಳಿಂದ ನನಗೆ ಸಂಬಂಧಿಗಳಾಗಿದ , ಶಿವಣ್ಣ ಎಂಥ ಮನುಷ್ಯ ಎಂದರೆ ಒಂದು ಬಾರಿ ಇವರ ಸಂಪರ್ಕ ಬಂದ ಯಾರೇ ಆದರೂ , ಅಷ್ಟು ಸುಲಭವಾಗಿ ಇವರನ್ನು ಮರೆಯಲಾಗದ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದರು , ತಂದೆಯ ಅಕ್ಕಿ ವ್ಯಾಪಾರದಲ್ಲಿ ನುರಿತ ಅಕ್ಕಿ ವ್ಯಾಪಾರಸ್ಥರಾಗಿ ತಮ್ಮ ಜೀವನದ ಪಯಣದಲ್ಲಿ ಯಶಸ್ಸಿನ ಉತ್ತುಂಗ ತಲುಪಲು ಪ್ರಯತ್ನಿಸುತ್ತಿದ್ದ , ಮಗುವಿನ ಮನಸ್ಸಿನ ನಮ್ಮ ಶಿವಣ್ಣ ರೂಢಿಸಿಕೊಂಡಿದ್ದ ಪ್ರತಿದಿನದ ಗಣಪತಿ ದೇವಸ್ಥಾನದ ಭೇಟಿ ನೀಡಿ ದೈವಭಕ್ತರನ್ನಾಗಿ ಮಾಡಿತು , ಸಂಬಂಧಿಕರ , ಸ್ನೇಹಿತರು ಯಾರೇ ಯಾವುದೇ ಕಾರ್ಯಕ್ರಮವಿರಲಿ ಶಿವಣ್ಣನ ಪ್ರಸ್ತುತಿ ಇರಲೇ ಬೇಕಾಗಿತ್ತುನಾವು ವಿನೋಬನಗರ ದಲ್ಲಿ ಇರುವತನಕ ನಾವು ಆಡಿದ ಆಟ ಇರಬಹುದು .  ...

ಹಳೆ ನೆನಪಿನ ಅನುಭವ

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಮತ್ತೇನು ಬಿಡುವುದು ಬಾಕಿ ಇದೆ ಎನ್ನುವಂತೆ. ನಮ್ಮ ಜೀವನ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಹುಟ್ಟಿದ ಊರನು ಬಿಟ್ಟು ಬರಲೇಬೇಕು. ಬಾಲ್ಯದಿಂದ ಶುರುವಾಗುವ ನಮ್ಮ ಜೀವನ ನಮ್ಮನು ಯಾವುದೋ ಕಾಣದ ಪ್ರಪಂಚಕ್ಕೆ ಸೆಳೆದುಕೊಂಡು ಹೋಗುತ್ತದೆ. ನಮ್ಮ ಬಾಲ್ಯದಲ್ಲಿ ಎಷ್ಟೋ ಸುಂದರ ಕ್ಷಣಗಳನ್ನು ಅನುಭವಿಸಿದ ನಾವು ಬೆಳೆಯುತ್ತಿದ್ದಂತೆ ಕ್ಷಣ ಕ್ಷಣಕ್ಕೆ ಎಲ್ಲವು ಮರೆಯಾಗುತ್ತದೆ. ಊರಲ್ಲಿ ಗೆಳೆಯರೊಂದಿಗೆ ಕೂಡಿ ಆಡಿದ ಮರಕೋತಿ ಆಟ, ಚಿಕುಬುಕು ರೈಲಾಟ, ಸೈಕಲ್ ಗಾಲಿಯಲಗಲಿ ಊರು ಸುತ್ತಿದ ರೇಸಾಟ, ನಮ್ಮೂರಿನ ಬೀಡ್ಜ್ ಮೇಲಿಂದ ಹಳ್ಳಕ್ಕೆ, ಅಣ್ಣ ತಮ್ಮರೊಂದಿಗೆ ಯಾವುದೋ ಸಣ್ಣ ವಿಷಯಕ್ಕೆ ಜಗಳವಾಡಿದ ಸಂದರ್ಭ, ಎಲ್ಲವು ನಮ್ಮ ಮನನಿಗೆ ಏನೋ ಒಂಥರಾ ಮಿತಿ ನೀಡುತ್ತದೆ ಸಂಗತಿಗಳಾಗಿದ್ದವು. ಸಮಯ ಬದಲಾದಂತೆ ನಾವು ಬದಲಾದದ್ದು ನಮ್ಮ ಅರಿವಿಗೆ ಬರುವುದಿಲ್ಲ. ನಾವು ಬೆಳೆಯುತ್ತಿದ್ದಂತೆ ನಮ್ಮ ಆಸೆಗಳೂ ಬದಲಾಗುತ್ತವೆ, ಹುಟ್ಟಿದ ಊರಲ್ಲಿ ಕಲಿಯುತ್ತಿದ್ದ ನಾವು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆಡೆ ಹೋಗುವ ಪ್ರಸಂಗ, ಮೊದಲ ಬಾರಿಗೆ ಊರು ಬಿಟ್ಟಾಗ ಆಗುವ ಅನುಭವ, ಕಾಡುವ ನನವು ಚಡಪಡಿಕೆ ನೀಡುತ್ತವೆ. ಎಷ್ಟೋ ಬಾರಿ ನಮ್ಮ ಗೆಳೆಯರು ತಮ್ಮಿಂದ ಇಲ್ಲಿರಲು ಸಾಧ್ಯವಿಲ್ಲವೆಂದು ಮರಳಿ ಊರಿಗೆ ಹೋದಾಗ ಮನದಲ್ಲಿ ಕೊರಗಿರುವುದೂ ಇದೆ, ರಜೆ ಯಾವಾಗ ಸಿಗುತ್ತಪ್ಪ ದೇವರೇ ಎಂದು ಮೊರೆ ಹೊದ್ದದ್ದು ಇದೆ. ವಿದ್ಯಾಭ್ಯಾಸದ ನಂತರ ಜೀವನದಲ್ಲಿ ಬೇಗ ಸೆಟಲ್...