flower
ಹೂವುಗಳನ್ನು ಇಷ್ಟಪಡುವವರಿಗೆ, ಹೂವಿನಷ್ಟೇ ಚಂದವಾದ ಸುಕೋಮಲಭಾವನೆಗಳು ವ್ಯಕ್ತವಾದ ಒಂದು ಲೇಖನವಿದು. ಚಿಂತನೀಯವೂ ಆಗಿದೆ! ======================= ಹೂವುಗಳ ಸ್ವಗತದಲ್ಲಿ ಬಾಳಿನ ಗಣಿತ [ವಿದ್ಯಾಶಂಕರ ಶರ್ಮ * ಲೋಕಧ್ವನಿ * 26Mar2025] ಜಗದ ಒಡಲಲ್ಲಿ ಹುದುಗಿರುವ ಅನೇಕ ವಿಸ್ಮಯಗಳಲ್ಲಿ ಬಣ್ಣಬಣ್ಣದ ಹೂವುಗಳು ನಮ್ಮನ್ನು ಬಹುವಾಗಿ ಆಕರ್ಷಿಸುವ ಸೌಂದರ್ಯದ ಗಣಿಗಳು. ಭಗವಂತನ ಪೂಜೆಗೆ, ಅಂಗನೆಯರ ಮುಡಿಗೆ, ಅಲಂಕಾರಕ್ಕೆ ಹೂವುಗಳು ಮುಡಿಪು. ಇಂತಹ ಮನಸೆಳವ ಪುಷ್ಪಗಳ ಸ್ವಗತವನ್ನು ನಾವು ಒಮ್ಮೆಯಾದರೂ ಕೇಳಿಸಿಕೊಳ್ಳಲು ಪ್ರಯತ್ನಿಸಿದ್ಧೇವೆಯೇ? ಕೇಳಿಸೆಕೊಂಡರೆ ಅವು ಹೇಳುವ ಭಾವಗಳು ಅಪಾರ. ಹೂವುಗಳು ಒಂದು ಬಾರಿ ಸಭೆ ನೆಡೆಸಿದವು, ತಮ್ಮ ಕಷ್ಟ ಸುಖದ ಚರ್ಚೆಯೇ ಆ ಸಭೆಯ ಮುಖ್ಯ ವಿಷಯವಾಗಿತ್ತು. ಮೊದಲಿಗೆ ಹೂವುಗಳ ರಾಣಿ ಕಮಲವು ತನ್ನ ಮಾತನ್ನು ಆರಂಭ ಮಾಡಿತು. ಅದು ಹೇಳಿತಂತೆ- ʼನನ್ನ ಪರಿಪಾಟಲು ಯಾರಿಗೂ ಬೇಡ, ಸದಾ ಕೆಸರಿನಲ್ಲಿ ಇರಬೇಕು, ಸುತ್ತ ಬರಿಯ ಕೊಳಕು ನೀರು, ದುಂಬಿಯ ಕಾಟ. ಬೇರೆ ಹೂವುಗಳ ತರಹ ನಾನೂ ಮನೆಯ ಮುಂದಿನ, ಅಥವಾ ಉದ್ಯಾವನದಲ್ಲಿ ಮಿನುಗಲು ಆಸೆʼ. ಆಗ ಇತರ ಹೂವುಗಳು ಕೇಳಿದವಂತೆ, ʼನೀನು ಕೆಸರಿನಲ್ಲಿ ಇದ್ಧರೂ ಆ ಕೆಸರು ನಿನಗೆ ತಾಕುವುದೇ ಇಲ್ಲ! ಅದು ಹೇಗೆ ನೀನು ನಿನ್ನನ್ನು ಸುತ್ತಲೂ ಇರುವ ಕಲ್ಮಷಗಳಿಂದ ಪ್ರಭಾವಕ್ಕೆ ಒಳಗಾಗದೇ ನಗುತ್ತ ಇರುತ್ತೀಯೇ?ʼ ಹೌದಲ್ಲ! ನಾವು ಯೋಚಿಸಬೇಕಾದ ವಿಷಯ. ತನ್ನ ಸುತ್ತ ನಕಾರಾತ್ಮಕ ವಾತಾವ...